ತೀರ್ಥಹಳ್ಳಿ , ಜೂ.29 : ತೀರ್ಥಹಳ್ಳಿಯ ಕುರುವಳ್ಳಿ ಬಳಿ ಸ್ನೇಹಿತನೊಬ್ಬ ಬಿಯರ್ ಕುಡಿಯಲ್ಲ ಎಂದಿದ್ದಕ್ಕೆ ಚಾಕು ತೆಗೆದುಕೊಂಡು ಚುಚ್ಚಿಬಿಟ್ಟಿದ್ದಾನೆ.
ತೀರ್ಥಹಳ್ಳಿಯ ಕುರುವಳ್ಳಿ ಬಾರ್ ಒಂದರಲ್ಲಿ ವ್ಯಕ್ತಿಯೊಬ್ಬ ಬಿಯರ್ ಕುಡಿಲಿಲ್ಲ ಅನ್ನೋ ವಿಚಾರಕ್ಕೆ ಸ್ನೇಹಿತನ ಮೇಲೆ ಚಾಕುವಿನಿಂದ ಇರಿದಿದ್ದಾನೆ. ಈ ವಿಚಾರವಾಗಿ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೂಲಿ ಕೆಲಸಗಾರ. ಈತ ಎಲ್ಲರಂತೆ ಕೆಲಸ ಮಾಡಿ ಮನೆಗೆ ಬಂದು ಮೈಕೈ ನೋವಿಗೆ ಸ್ವಲ್ಪ ಬಿಯರ್ ಕುಡಿಯೋಣ ಅಂತ ಕುರುವಳ್ಳಿ ಬಾರ್ ಒಂದಕ್ಕೆ ಹೋಗಿದ್ದಾರೆ. ನಂತರ ಒಬ್ಬರೇ ಬಿಯರ್ ಕುಡಿಯುತ್ತಾ ಕುಳಿತಿದ್ದಾರೆ. ಈ ಸಂದರ್ಭದಲ್ಲಿ ಹಳೆ ಸ್ನೇಹಿತನೊಬ್ಬ ಬಾರ್ನಲ್ಲಿ ಎದುರಾಗಿದ್ದಾನೆ. ಆತ ನನ್ನ ನೋಡಿದವನೇ ತಮಾಷೆಗೆಂದು ಬಾರೋ ನಾನೇ ನಿನಗೆ ಬಿಯರ್ ಕೊಡಿಸ್ತೀನಿ, ನೀನು ಕುಡಿಬೇಕು ಎಂದು ಒತ್ತಾಯಿಸಿದ್ದಾನೆ.
ಆಗ ಬೀಯರ್ ಬೇಡವೆಂದು ಸ್ನೇಹಿತನ ಆಫರ್ನ್ನು ನಯವಾಗಿಯೇ ನಿರಾಕರಿಸಿದ್ದಾನೆ. ಆಗ ಕೆರಳಿದ ಸ್ನೇಹಿತ, *ನಾನು ಕೊಡ್ಸಿದ್ರೆ ನೀನು ಕುಡಿಯಲ್ಲ, ಬೇರೆಯವರು ಕೊಡ್ಸಿದ್ರೆ ಕುಡಿತೀಯಾ ಅಂತ ಜಗಳ ತೆಗೆದಿದ್ದಾನೆ.* ಇದನ್ನ ಗಮನಿಸಿ ಇಲ್ಲಿದ್ದರೆ ಸರಿ ಆಗಲ್ಲ ಅಂತ ಬಾರ್ನಿಂದ ಹೊರಡಲು ಸಿದ್ದರಾಗಿದ್ದಾರೆ. ಆದರೆ ಈ ವೇಳೆ ಕೋಪಗೊಂಡ ಆರೋಪಿ ಹಾಗೂ ಆತನ ಜತೆಗಿದ್ದ ಇನ್ನೊಬ್ಬಾತ ಬಿಯರ್ ಬಾಟಲ್ನಿಂದ ಹಲ್ಲೆ ಮಾಡೋಕೆ ಮುಂದಾಗಿದ್ದಾರೆ. ಆಗ ಅಂಜನಪ್ಪ ಹೇ ನನಗೆ ಹೊಡಿಯೋಕೆ ಬರ್ತಿಯಾ, ನಿನ್ನ ಅಣ್ಣನಿಗೆ ಹೇಳ್ತೇನೆ ಎಂದಿದ್ದಾರೆ. ಇದರಿಂದ ಮತ್ತಷ್ಟು ಸಿಟ್ಟಾದ ಆರೋಪಿ ನೀನು ಬದ್ಕಿದ್ರೆ ತಾನೇ ನಿನ್ನ ಅಣ್ಣನಿಗೆ ಹೇಳೋದು ಅಂತ ಚಾಕನ್ನು ಚುಚ್ಚಲು ಮುಂದಾಗಿದ್ದಾನೆ.
ಈ ವೇಳೆ ತಪ್ಪಿಸಿಕೊಂಡಿದ್ದಾರೆ. ಆದರೂ ಸಹ ಚಾಕು ಅವರ ಬೆನ್ನಿಗೆ ತಾಗಿ ಗಾಯಗಳಾಗಿವೆ. ಆಗ ಕೂಗಿಕೊಂಡಾಗ ಬಾರ್ ಮಾಲೀಕರು, ಕ್ಯಾಶಿಯರ್ ಮತ್ತು ಅಕ್ಕಪಕ್ಕದವರು ಉಪಚರಿಸಿ ಜೆ.ಸಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
