ಶಿವಮೊಗ್ಗ,29 : ನ್ಯಾಶನಲ್ ಡೈಮಂಡ್ ನೇತೃತ್ವದಲ್ಲಿ, ಮಾಸ್ಟರ್ ಕನ್ಸಲ್ಟನ್ಸಿ ಸರ್ವಿಸಸ್, ನಾರಾಯಣ ಹೆಲ್ತ್ ಮಲ್ನಾಡ್ ಅಲಾಯ್ ಕಾಸ್ಟಿಂಗ್ ಪ್ರೈವೇಟ್ ಲಿಮಿಟೆಡ್ ಮತ್ತು ಇತರ ಪ್ರಮುಖ ಪ್ರಾಯೋಜಕರ ಸಹಕಾರದೊಂದಿಗೆ, ಶಿವಮೊಗ್ಗ ಪ್ರೀಮಿಯರ್ ಲೀಗ್ (ಎಸ್ ಪಿಎಲ್) ಸೀಸನ್ 3 ಪಂದ್ಯಾವಳಿ ಮೇ 1 ರಿಂದ ಮೇ 4 ರವರೆಗೆ ಶಿವಮೊಗ್ಗ ಕೆಎಸ್ಸಿಎ ನವುಲೆ ಮೈದಾನದಲ್ಲಿ ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಎಂಎಲ್ಸಿ ಮತ್ತು ಕೆಎಸ್ ಸಿಎ ಮಾಜಿ ಸದಸ್ಯ ಡಿ ಎಸ್ ಅರುಣ್, ಈ ಪಂದ್ಯಾವಳಿಯಲ್ಲಿ ಒಟ್ಟು ಎಂಟು ತಂಡಗಳು ತಮ್ಮದೇ ಆದ ಮಾಲೀಕತ್ವದಡಿ ನಡೆಯಲಿವೆ.
ತಂಡಗಳು ಮತ್ತು ಮಾಲಿಕರ ವಿವರ:
1 ನ್ಯಾಶನಲ್ ಗೋಲ್ಟ್ ಆಂಡ್ ಡೈಮಂಡ್ಸ್, ಮಾಲೀಕರು: ಅಬ್ದುಲ್ ಕಲಾಂ ಆಜಾದ್ 2. ಟಿಪ್ ಟಾಪ್ ಬೈಸನ್ಸ್ – ಮಾಲೀಕರು: ಬಶೀರ್ ಅಹ್ಮದ್ ಮತ್ತು ಜಾನಿ. 3.ಕಲ್ಯಾಣಿ ಶಿವಮೊಗ್ಗ ಬ್ಲಾಸ್ಟರ್ಸ್ ಮಾಲೀಕರು: ರೋಹನ್ ರಾಜು ಮತ್ತು ಕುನಾಲ್ 4. ಸಿರಿ ಸಮೃದ್ಧ ಮಾಸ್ಟರ್ ಬೀಸ್ – ಮಾಲೀಕರು:
ವಿಶ್ವಾಸ ಮತ್ತು ಅಮಿತ್ಕುಮಾರ್ ಎಸ್.ಜಿ 5. ಸಹ್ಯಾದ್ರಿ ಸ್ಟೈಕರ್ಸ್ – ಮಾಲೀಕರು: ಅಶೋಕ್ ಬಸು 6. ಮೈಟಿ ಟಸ್ಕರ್ಸ್ – ಮಾಲೀಕರು: ಕೆನಿತ್ ಹರ್ಷ 7.ದಿ ವಾಲ್ ಸಿಸಿ ಭದ್ರಾವತಿ – ಮಾಲೀಕರು: ಮೈಕಲ್ ಮತ್ತು ಬಾಬು 8. ತುಂಗಾ ಥಂಡರ್ಸ್ – ಮಾಲೀಕರು: ಮಿಥುನ್ ಮತ್ತು ಅನಿಲ್ ಪಾಟೀಲ್.
ಈ ಪಂದ್ಯಾವಳಿಗೆ ಏಪ್ರಿಲ್ 11 ರಂದು ಕಂಟ್ರಿ ಕ್ಲಬ್, ಶಿವಮೊಗ್ಗದಲ್ಲಿ ಆಟಗಾರರ ಹರಾಜು ಆಯೋಜಿಸಲಾಗಿತ್ತು. ಒಟ್ಟು ೧೬೮ ಆಟಗಾರರು ಆಕ್ಷನ್ನಲ್ಲಿ ಭಾಗವಹಿಸಿ, ೧೪೦ ಆಟಗಾರರು ವಿವಿಧ ತಂಡಗಳಿಗೆ ಆಯ್ಕೆಯಾಗಿದ್ದಾರೆ ಎಂದರು.
ಪಂದ್ಯಾವಳಿಯ ವೇಳಾಪಟ್ಟಿ:
ಪ್ರತಿದಿನ ಎರಡು ಪಂದ್ಯಗಳು: ಮೊದಲ ಪಂದ್ಯ: ಬೆಳಿಗ್ಗೆ 09:30 ರಿಂದ ಮಧ್ಯಾಹ್ನ 12:30 | ಎರಡನೇ ಪಂದ್ಯ: ಮಧ್ಯಾಹ್ನ 01:30 ರಿಂದ ಸಂಜೆ 04:30
ಸ್ಥಳ: ಕೆಎಸ್ಸಿಎ ಒಂದು ಮತ್ತು ಎರಡನೆಯ ಮೈದಾನ, ನವುಲೆ, ಶಿವಮೊಗ್ಗ
ಹಲವಾರು ಕೆಪಿಎಲ್ ಅನುಭವಿಗಳಾದ ಆಟಗಾರರು ಹಾಗೂ ರಾಜ್ಯಮಟ್ಟದ ಪ್ರತಿಷ್ಠಿತ ಆಟಗಾರರು ಎಸ್ ಪಿಎಲ್ ಸೀಸನ್ ೩ರಲ್ಲಿ ಭಾಗವಹಿಸಲಿದ್ದಾರೆ. ಇದು ಶಿವಮೊಗ್ಗದ ಕ್ರೀಡಾಭಿಮಾನಿಗಳಿಗೆ ಅತ್ಯಂತ ಮನರಂಜನೆಯ ಕ್ರಿಕೆಟ್ ಹಬ್ಬವಾಗಲಿದೆ ಎಂದರು.