ನವದೆಹಲಿ,ಮೇ .16 :ಮಧ್ಯ ಪ್ರಾಚ್ಯ ಸಂಘರ್ಷ ಜಗತ್ತಿನಾದ್ಯಂತ ವ್ಯಾಪಕ ಆತಂಕಕ್ಕೆ ಕಾರಣವಾಗಿದ್ದು, ಜಾಗತಿಕ ಇಂಧನ ಸಂಕಷ್ಟ ತೀವ್ರಗೊಳ್ಳುತ್ತಿರುವಂತೆಯೇ ಪರಿಸ್ಥಿತಿ ಬದಲಾಗದಿದ್ದರೆ ಭಾರತಕ್ಕೆ ಮತ್ತೆ ಭಾರಿ ಬಡತನ ಮರಳಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದರು.
ಜಾಗತಿಕ ನಾಯಕರು, ಕೈಗಾರಿಕಾ ತಜ್ಞರು ಭಾಗವಹಿಸಿದ್ದ ಅಂತರರಾಷ್ಟ್ರೀಯ ಇಂಧನ ಮತ್ತು ಆರ್ಥಿಕ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಜಾಗತಿಕ ಇಂಧನ ಸಂಕಷ್ಟ ತೀವ್ರಗೊಳ್ಳುತ್ತಿರುವ ಬಗ್ಗೆ ಗಂಭೀರ ಆತಂಕ ವ್ಯಕ್ತಪಡಿಸಿದರು.
’ಜಾಗತಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ಇಂಧನ ಸರಬರಾಜು ಸರಪಳಿಯ ವ್ಯತ್ಯಯಗಳು ವಿಶ್ವದ ಆರ್ಥಿಕತೆಗಳ ಮೇಲೆ, ವಿಶೇಷವಾಗಿ ಅಭಿ ವೃದ್ಧಿಶೀಲ ರಾಷ್ಟ್ರಗಳ ಮೇಲೆ, ದೊಡ್ಡ ಪರಿಣಾಮ ಬೀರುತ್ತವೆ ಎಂದು ಅವರು ಎಚ್ಚರಿಸಿದರು.ಅಂತೆಯೇ ಎಲ್ಲರಿಗೂ ಸ್ಥಿರ, ಕೈಗೆಟುಕುವ ಮತ್ತು ಶಾಶ್ವತ ಇಂಧನ ಲಭ್ಯತೆ ಖಚಿತಪಡಿಸಲು ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡಬೇಕೆಂದು ಒತ್ತಿಹೇಳಿದರು.
ದಶಕಗಳ ಪರಿಶ್ರಮ ವ್ಯರ್ಥ, ಬಡತನ ಮರಳಿಬಹುದು :
ಸಂಘರ್ಷಗಳು, ಕಚ್ಚಾ ತೈಲದ ಬೆಲೆ ಏರಿಕೆ, ಸರಬರಾಜಿನ ವ್ಯತ್ಯಯಗಳು ಮತ್ತು ಹೆಚ್ಚುತ್ತಿರುವ ಇಂಧನ ಬೇಡಿ ಕೆಗಳಿಂದ ವಿಶ್ವವು ಅಪೂರ್ವ ಅನಿಶ್ಚಿತ ತೆಯ ಅವಯನ್ನು ಎದುರಿಸು ತ್ತಿದೆ. ಈ ಪರಿಸ್ಥಿತಿ ದರ ಏರಿಕೆಯ ಒತ್ತಡವನ್ನು ಉಂಟುಮಾಡಿ, ಆರ್ಥಿಕ ಬೆಳವಣಿಗೆಯನ್ನು ನಿಧಾನ ಗೊಳಿಸಿ, ಆಮದು ಇಂಧನದ ಮೇಲೆ ಅವಲಂಬಿ ತವಾಗಿರುವ ಬಡ ರಾಷ್ಟ್ರ ಗಳಿಗೆ ಗಂಭೀರ ಸಂಕಷ್ಟವನ್ನು ತರಬಹುದು ಎಂದು ಎಚ್ಚರಿಸಿದರು.
ಅಲ್ಲದೆ ವಿಷಯಗಳು ಬದಲಾಗದಿದ್ದರೆ, ಕಳೆದ ಕೆಲವು ದಶಕಗಳಲ್ಲಿ ಸಾಸಿದ ಪ್ರಗತಿಯನ್ನು ಇದು ಅಳಿಸಿಹಾಕಬಹುದು ಮತ್ತು ಭಾರಿ ಬಡತನ ಮರಳಬಹುದು ಎಂದು ಎಚ್ಚರಿಕೆ ನೀಡಿದರು.
ಜಾಗತಿಕ ಇಂಧನ ಮಾರು ಕಟ್ಟೆ ಭಾರೀ ಒತ್ತಡದಲ್ಲಿದೆ. ಇಂಧನ ಭದ್ರತೆ ಇಂದು ಕೇವಲ ಆರ್ಥಿಕ ವಿಷಯ ವಲ್ಲ, ಅದು ತಂತ್ರಾತ್ಮಕ ಮತ್ತು ಮಾನವೀಯ ಕಳ ಕಳಿಯ ವಿಷಯವೂ ಆಗಿದೆ. ಜಾಗತಿಕ ಇಂಧನ ಬೆಲೆಗಳ ಏರಿಳಿತದಿಂದ ಅಭಿವೃದ್ಧಿಶೀಲ ರಾಷ್ಟ್ರಗಳು ಅತ್ಯಂತ ಹೆಚ್ಚು ಹಾನಿಗೊಳಗಾಗುತ್ತಿವೆ. ತೈಲ ಮತ್ತು ಅನಿಲದ ಬೆಲೆಗಳಲ್ಲಿ ಏಕಾಏಕಿ ಉಂಟಾಗುವ ಏರಿಕೆಗಳು ಸಾರಿಗೆ, ಆಹಾರ ಸರಬರಾಜು ಸರಪಳಿ, ಉತ್ಪಾದನಾ ವೆಚ್ಚ ಮತ್ತು ಗೃಹ ಖರ್ಚುಗಳ ಮೇಲೆ ನೇರ ಪರಿಣಾಮ ಬೀರುತ್ತವೆ. ಇಂಧನ ಮೂಲಗಳನ್ನು ವೈವಿಧ್ಯಗೊಳಿಸುವುದು ಮತ್ತು ಪ್ರಮುಖ ಇಂಧನ ಸರಬರಾಜಿಗಾಗಿ ಕೆಲವು ಪ್ರದೇಶಗಳ ಮೇಲೆ ಅವಲಂಬನೆಯನ್ನು ಕಡಿಮೆ ಮಾಡುವ ಅಗತ್ಯವನ್ನೂ ಒತ್ತಿ ಹೇಳಿದರು.
ಪುನರ್ನವೀಕರಿಸಬಹುದಾದ ಇಂಧನ ಅಭಿವೃದ್ಧಿ, ಸ್ವಚ್ಛ ತಂತ್ರಜ್ಞಾನ ಹಂಚಿಕೆ ಮತ್ತು ಶಾಶ್ವತ ಮೂಲಸೌಕರ್ಯ ಹೂಡಿಕೆಯಲ್ಲಿ ಹೆಚ್ಚಿನ ಅಂತರರಾಷ್ಟ್ರೀಯ ಸಹಕಾರ ನೀಡಬೇಕು ಎಂದ ಅವರು, ಸೌರಶಕ್ತಿ, ಗ್ರೀನ್ ಹೈಡ್ರೋಜನ್ ಮತ್ತು ಜೈವ ಇಂಧನಗಳಂತಹ ಹಸಿರು ಯೋಜನೆಗಳನ್ನು ಉತ್ತೇಜಿಸುವ ಮೂಲಕ ಭಾರತ ನಿರಂತರವಾಗಿ ತನ್ನ ಪುನರ್ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ವಿಸ್ತರಿಸುತ್ತಿದೆ ಎಂದು ಹೇಳಿದರು.
ಅಲ್ಲದೆ ದೇಶದ ಹೆಚ್ಚುತ್ತಿರುವ ಜನಸಂಖ್ಯೆಯ ಇಂಧನ ಅಗತ್ಯಗಳನ್ನು ಸಮತೋಲನಗೊಳಿಸುತ್ತಾ, ದೀರ್ಘಕಾಲೀನ ಹವಾಮಾನ ಗುರಿಗಳನ್ನು ಸಾಸುವ ಬದ್ಧತೆಯನ್ನು ಭಾರತ ಹೊಂದಿದೆ ಎಂದು ಪ್ರಧಾನಿ ಮೋದಿ ಪುನರುಚ್ಚರಿಸಿದರು.
ಭಾಷಣದ ವೇಳೆ ಜಾಗತಿಕ ಸರಬರಾಜು ಸರಪಳಿಗಳ ಸ್ಥೈರ್ಯದ ಮಹತ್ವವನ್ನೂ ಪ್ರಧಾನಿ ಮೋದಿ ಉಲ್ಲೇಖಿಸಿಸಿದ್ದು, ರಾಷ್ಟ್ರಗಳು ಇಂಧನ ಸಂಪನ್ಮೂಲಗಳನ್ನು ರಾಜಕೀಯ ಆಯುಧಗಳಾಗಿ ಬಳಸುವುದನ್ನು ತಪ್ಪಿಸಿ, ಪಾರದರ್ಶಕ ಮತ್ತು ವಿಶ್ವಾಸಾರ್ಹ ಇಂಧನ ಸಹಭಾಗಿತ್ವಗಳನ್ನು ನಿರ್ಮಿಸುವತ್ತ ಗಮನಹರಿಸಬೇಕು.
-ನರೇಂದ್ರ ಮೋದಿ, ಪ್ರಧಾನಿ
