ತ್ಯಾವರೆಕೊಪ್ಪ ಹುಲಿ ಸಿಂಹಧಾಮಕ್ಕೆ ಬರಲಿದೆ 2 ಸಿಂಹದ ಮರಿಗಳು

Kranti Deepa

ಶಿವಮೊಗ್ಗ, ಮೇ 27 : ನಗರದ ಹೊರವಲಯದಲ್ಲಿರುವ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೆ ಮಧ್ಯಪ್ರದೇಶದ ಇಂದೋರ್ ನಗರದಿಂದ ಸಿಂಹದ ಮರಿಗಳು ಬರಲಿವೆ.

ಪ್ರಾಣಿ ವಿನಿಮಯ ಯೋಜನೆಯ ಅಂಗವಾಗಿ, ಇಂದೋರಿನ ಕಮಲಾ ನೆಹರು ಪ್ರಾಣಿಸಂಗ್ರಹಾಲಯದಿಂದ ೨ ವರ್ಷ ವಯಸ್ಸಿನ ಸಿಂಹ-ಸಿಂಹಿಣಿಯ ಜೋಡಿಯನ್ನು ಶಿವಮೊಗ್ಗಕ್ಕೆ ಕರೆತರಲಾಗುತ್ತಿದೆ. ಈ ಬಗ್ಗೆ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ಒಪ್ಪಂದದ ಪ್ರಕಾರ, ಶಿವಮೊಗ್ಗದ ಸಫಾರಿಯಿಂದ ನಾಲ್ಕು ಭಾರತೀಯ ಗೌರ್ (ಕಾಡೆಮ್ಮೆ)ಗಳನ್ನು ಇಂದೋರ್ ಮೃಗಾಲಯಕ್ಕೆ ರವಾನೆ ಮಾಡಲಾಗುವುದು. ಈ ವಿನಿಮಯ ಪ್ರಕ್ರಿಯೆಗೆ ಕೇಂದ್ರೀಯ ಮೃಗಾಲಯ ಪ್ರಾಧಿಕಾರದ  ಅನುಮತಿ ಲಭಿಸಿದೆ. ಹೀಗೆ ರಾಜ್ಯಗಳ ನಡುವೆ ಪ್ರಾಣಿ ವೈವಿಧ್ಯ ಸಂರಕ್ಷಣೆಗೆ ಅವಕಾಶ ಒದಗಿದೆ.

Share This Article
";