ಜೈಲಿನಿಂದ ಹೊರಬಂದ ರೌಡಿಯ ಕಾಲಿಗೆ ಪೊಲೀಸರ ಗುಂಡೇಟು

Kranti Deepa

ಶಿವಮೊಗ್ಗ, : ಸಾಗರ ತಾಲೂಕಿನ ಆನಂದಪುರದಲ್ಲಿ ಬೆನ್ಜ್ ಲಾರಿಗೆ ಅಡ್ಡ ಹಾಕಿ ಸುಲಿಗೆ, ಬೆದರಿಕೆ, ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಹಾಕಿಸಿ ಹಣ ನೀಡದೆ ಎಸ್ಕೇಪ್,  ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದ ಬೆನ್ನಲ್ಲೆ ಸಚಿನ್ ಅಲಿಯಾಸ್ ಸ್ಯಾಡೋ ಕಾಲಿಗೆ ಪೊಲೀಸರು ಗುಂಡೇಟು ಹೊಡೆದು ಮಂಗಳವಾರ ಬಂಧಿಸಿದ್ದಾರೆ.

ಗೂಂಡಾ ಆಕ್ಟ್ ನಲ್ಲಿ ಒಂದು ವರ್ಷದ ಹಿಂದೆ ಜೈಲಿಗೆ ತೆರಳಿದ್ದ ಸಚಿನ್ ಸ್ಯಾಡೋ 20 ದಿನಗಳ ಹಿಂದೆ ರಿಲೀಸ್ ಆಗಿ ಬಂದಿದ್ದ. ದೊಡ್ಡಪೇಟೆ, ತುಂಗ ನಗರ , ಜಯನಗರ, ಕೋಟೆ, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ, ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣಗಳು ದಾಖಲಾಗಿತ್ತು.

20 ದಿನಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ಸ್ಯಾಡೋ ಆನಂದಪುರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಚಲಿಸುತ್ತಿದ್ದ  ಲಾರಿಯನ್ನು ಅಡ್ಡಹಾಕಿ ಚಾಲಕನ ಮೊಬೈಲ್ ಮತ್ತು ಹಣ ಕಿತ್ತುಕೊಂಡು ಓಡಿಹೋಗಿದ್ದ.

ಪೆಟ್ರೋಲ್ ಬಂಕ್ ನಲ್ಲಿ ಹಣ ನೀಡದೆ ಟೋಪಿಹಾಕಿ ಪರಾರಿಯಾಗಿದ್ದ ಸಚಿನ್ ಯಾನೆ ಸ್ಯಾಡೋ ವಿರುದ್ಧ ಪೆಟ್ರೋಲ್ ಬಂಕ್ ನ  ಸಂಘದ ಅಧ್ಯಕ್ಷ ಮತ್ತು ಎಂಎಲ್ ಸಿ ಅರುಣ್ ಎಸ್ಪಿ ಅವರಿಗೆ ಮಾಹಿತಿ ನೀಡಿದ್ದರು. ಈ ಹಿನ್ನಲೆಯಲ್ಲಿ ಆನಂದಪುರ ಮತ್ತು ಎಸ್ಪಿಗೆ  ದೂರು ನೀಡಿದ್ದ ಪ್ರಕರಣದಲ್ಲಿ ಸಚಿನ್ ಯಾನೆ ಸ್ಯಾಡೊ ಕಾಲಿಗೆ ಗುಂಡು ಹಾರಿಸಲಾಗಿದೆ.

ಇಂದು ಮೆಣಸಿನಸರಕ್ಕೆ ಹೋಗಿದ್ದ ಆನಂದಪುರದ ಪಿಎಸ್‌ಐ ಯುವರಾಜ್ ಮತ್ತು ಸಿಬ್ಬಂದಿಗಳು ಸ್ಯಾಡೋವನ್ನು ಹಿಡಿಯಲು ಹೋಗಿದ್ದಾಗ ಸಿಬ್ಬಂದಿಗಳ ಮೇಲೆ ಸ್ಯಾಡೋ ಮಚ್ಚು ಬೀಸಿದ್ದಾನೆ. ಒಂದು ಸುತ್ತು ಪಿಎಸ್‌ಐ ಗುಂಡು ಹಾರಿಸಿದ್ದಾರೆ. ನಂತರ ಆತನ ಎಡಗಾಲಿಗೆ ಗುಂಡು ಹಾರಿಸಿ ರಕ್ಷಣೆ ಮಾಡಲಾಗಿದೆ. ಗಾಯಗೊಂಡ ಸಿಬ್ಬಂದಿ ಮತ್ತು ಸಿಬ್ಬಂದಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Share This Article
";