ಶಿವಮೊಗ್ಗ,ಜೂ.03 : ಬಾನೆತ್ತರದಲ್ಲಿ ಪಟಾಕಿ ಸಿಡಿಯಿತು, ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತು. ಅಭಿಮಾನಿಗಳು ಅಷ್ಟೇ ಅಲ್ಲದೆ ಕ್ರೀಡಾಪಟುಗಳು ಸಹ ಮೈದಾನದಲ್ಲಿ ಆನಂದ ಬಾಷ್ಪವನ್ನು ಸುರಿಸಿದರು. ಶಿವಮೊಗ್ಗದ ವಿವಿಧೆಡೆ ಅಭಿಮಾನಿಗಳು ವಿವಿಧ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿದರು.
ಬಾರ್ ಹಾಗೂ ಕ್ಲಬ್ಗಳಲ್ಲಿ ಕ್ರಿಕೆಟ್ ಪಂದ್ಯಾವಳಿ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಬಾರ್ನಲ್ಲಿ ಕ್ರಿಕೆಟ್ ವೀಕ್ಷಿಸಲೆಂದೇ ನೂರಾರು ಜನ ಭಾಗವಹಿಸಿದ್ದರು,. ಬಹುತೇಕ ಟೇಬಲ್ಗಳು ಭರ್ತಿಯಾಗಿದ್ದವು. ಟೇಬಲ್ನಲ್ಲಿ ಅಭಿಮಾನಿಗಳು ಮದ್ಯದೊಂದಿಗೆ ಪಂದ್ಯವನ್ನು ವೀಕ್ಷಿಸಿದರು.
ಆರ್ಸಿಬಿ ಗೆಲ್ಲುವ ಸಮಯದಲ್ಲಿ ನಗರದೆಲ್ಲೆಡೆ ಪಟಾಕಿ ಸದ್ದು ಕೇಳಿಸಲು ಆರಂಭಿಸಿದವು, ಆಭಿಮಾನಿಗಳ ಹರ್ಷ್ಟೋದ್ಘಾರ ಮುಗಿಲು ಮುಟ್ಟಿತು. ಈ ವೇಳೆ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸ ಪಟ್ಟರು. ಹಾಗೆಯೇ ನೆಹರು ರಸ್ತೆಯಲ್ಲಿ ವಿಜಯೋತ್ಸವದ ಸಂದರ್ಭದಲ್ಲಿ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು.
ಸಂಭ್ರಮಾಚರಣೆಯ ವೇಳೆ ಅನೇಕ ಅನಾಹುತಗಳು ನಡೆಯಿತು. ಉಷಾ ನರ್ಸಿಂಗ್ ಹೋಮ್ ಸಮೀಪ ಬೈಕ್ಗಳ ನಡುವೆ ಡಿಕ್ಕಿಯಾಗಿ ಆರ್ಸಿಬಿ ಅಭಿಮಾನಿ ಅಭಿ (21 ) ಎಂಬಾತ ಸಾವನ್ನಪ್ಪಿದನು. ಹಾಗೆಯೇ ದುರ್ಗಿಗುಡಿ ಮುಖ್ಯ ರಸ್ತೆಯಲ್ಲಿ ಕಾಟನ್ ಜಗದೀಶ್ ಎಂಬುವವರು ನಿಲ್ಲಿಸಿದ್ದ ಕಾರಿಗೆ ರಾತ್ರಿ ವಾಹನ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಕಾರಿನ ಮುಂಬಾಗ ಜಖಂಗೊಂಡಿದೆ.
ಹೀಗೆ ನಗರದ ವಿವಿದೆಡೆ ಆರ್?ಸಿಬಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತು. ಎಲ್ಲರೂ ಸಹ ಎಲ್ಲರೂ ಸಹ ಈ ಸಲ ಕಪ್? ನಮ್ದು ಎಂದು ಘೋಷಣೆ ಕೂಗಿದರು,