ಶಿವಮೊಗ್ಗ, ಅ.15 : ಜಿಲ್ಲಾ ಕೇಂದ್ರೀಯ ಸಹಕಾರ ಬ್ಯಾಂಕ್ (ಡಿಸಿಸಿ ಬ್ಯಾಂಕ್) ನ ಆಡಳಿತ ಮಂಡಳಿಯಲ್ಲಿ ಅಪೆಕ್ಸ್ಸ್ ಬ್ಯಾಂಕಿನ ಪ್ರತಿನಿಧಿಯನ್ನಾಗಿ ಎಂ. ಶ್ರೀಕಾಂತ್ ಅವರನ್ನು ನಾಮನಿರ್ದೇಶನ ಮಾಡಲಾಗಿದೆ. ಕಾಂಗ್ರೆಸ್ ಮುಖಂಡರಾಗಿರುವ ಶ್ರೀಕಾಂತ್ ಆ. 13 ರಿಂದ ಜಾರಿಗೆ ಬರುವಂತೆ ನಾಮನಿರ್ದೇಶನಗೊಂಡಿದ್ದಾರೆ. ಇಲ್ಲಿಯವರೆಗೆ ಈ ಸ್ಥಾನದಲ್ಲಿದ್ದ ಬ್ಯಾಂಕಿನ ಸಹಾಯಕ ಪ್ರಧಾನ ವ್ಯವಸ್ಥಾಪಕ ಎಲ್. ಜಗದೀಶ್ ಅವರ ನಾಮನಿರ್ದೇಶನವನ್ನು ವಾಪಸ್ ಪಡೆಯಲಾಗಿದೆ ಎಂದು ಅಪೆಕ್ಸ್ಸ್ ಬ್ಯಾಂಕಿನ ಪ್ರಕೆಟಣೆ ತಿಳಿಸಿದೆ.
ಡಿಸಿಸಿ ಬ್ಯಾಂಕ್ನಿಂದ ಅಪೆಕ್ಸ್ ಬ್ಯಾಂಕ್ ಪ್ರತಿನಿಧಿಯಾಗಿ ಎಂ. ಶ್ರೀಕಾಂತ ನೇಮಕ
