ಅಕ್ರಮ ಮರಳು ಅಡ್ಡೆಗಳಿಗೆ ದಾಳಿ

Kranti Deepa

ಶಿವಮೊಗ್ಗ,  ಮೇ 15, : ಆನವೇರಿ ಗ್ರಾಮದಲ್ಲಿ ಬೆಳ್ಳಂಬೆಳಿಗ್ಗೆ ಎಸಿ ಸತ್ಯನಾರಾಯಣ ಅವರ ನೇತೃತ್ವದಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಅಡ್ಡೆಗೆ ದಾಳಿ ನಡೆಸಲಾಗಿದೆ.
ದಾಳಿಯಲ್ಲಿ ಬೋಟು, ಹಿಟಾಚಿ, ಜೆಸಿಬಿ ಮತ್ತು ಮರಳನ್ನು ವಶಕ್ಕೆ ಪಡೆಯಲಾಗಿದೆ.

ಭದ್ರಾವತಿ ತಾಲೂಕು ನಿಂಬೆಗೊಂದಿ, ಜೊಯೆಗೆ ಹನಗವಾಡಿಗಳಲ್ಲಿ ತುಂಗಭದ್ರ ನದಿಯಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ವೇಳೆ ದಾಳಿ ನಡೆದಿದ್ದು ದಾಳಿಯಲ್ಲಿ ಅಪಾರ ಪ್ರಮಾಣದ ಮರಳು ವಶವಾಗಿದೆ. ಆದರೆ ಯಾವುದೇ ಆರೋಪಿಗಳು ಪತ್ತೆಯಾಗಿಲ್ಲ. ಹನಗವಾಡಿಯಲ್ಲಿ ರಾತ್ರಿಯ ವೇಳೆ ನದಿಯಲ್ಲಿ ಬೋಟಿನ ಮೂಲಕ ಮರಳು ಎತ್ತಲು ಹೋಗಿ ಬೋಟು ಸಹ ಮುಳುಗಿದೆ. ಇದನ್ನು ಎತ್ತಲು ಜೆಸಿಬಿ ಮತ್ತು ಹಿಟಾಚಿ ಬಳಸಲಾಗಿದೆ. ಈ ಮೂರು ಯಂತ್ರಗಳನ್ನು ಸಹ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ನಂತರ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಗೆ ಹಸ್ತಂತರಿಸಲಾಗಿದೆ.

ನಿಂಬೆಗೊಂದಿಯಲ್ಲಿ ಈ ಮೊದಲು ಒಂದೇ ಪಾಯಿಂಟ್ ನಲ್ಲಿ ಅಕ್ರಮ ಮರಳು ನಡೆಯುತ್ತಿತ್ತು. ಕೆಲ ರಾಜಕೀಯ ಬೆಳವಣಿಗೆಯಲ್ಲಿ ಈಗ ಮೂರು ಪಾಯಿಂಟ್ ಗಳ ನಿರ್ಮಾಣಗೊಂಡು ಭರ್ಜರಿಯಾಗಿ ಅಕ್ರಮ ಮರಳು ತೆಗೆಯಲಾಗುತ್ತಿದೆ.

Share This Article
";